ಸಾಗರ : ಎಸ್ಐಆರ್ ಕರ್ತವ್ಯದಲ್ಲಿದ ಮಹಿಳಾ ಅಧಿಕಾರಿ ಮೇಲೆ ನಾಯಿ ದಾಳಿ ಮಾಡಿದ ಘಟನೆ ತಾಲೂಕಿನ ಆನಂದಪುರದಲ್ಲಿ ನಡೆದಿದೆ.
ಬಿ.ಎಲ್.ಓ ಲಕ್ಷ್ಮಿ ಸಿಂಗ್ ಆನಂದಪುರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಮನೆಮನೆ ಸಮೀಕ್ಷೆ ಕರ್ತವ್ಯದಲ್ಲಿದ್ದರು. ಎಸ್ ಐ ಆರ್ ಸಮೀಕ್ಷೆ ಗಾಗಿ ಮನೆಯೊಂದರ ಬಳಿ ತೆರಳಿದಾಗ ಅಲ್ಲಿ ಸಾಕಲಾಗಿದ್ದ ನಾಯಿ ಅವರ ಮೇಲೆ ದಾಳಿ ಮಾಡಿದೆ. ನಾಯಿಯು ಲಕ್ಷ್ಮಿಸಿಂಗ್ ಅವರ ಕಾಲಿಗೆ ಬಲವಾಗಿ ಕಚ್ಚಿದೆ.
ಘಟನೆ ನಡೆಯುತ್ತಿದ್ದಂತೆ ಸ್ಥಳೀಯರು ಹಾಗೂ ಸಹೋದ್ಯೋಗಿಗಳು ಲಕ್ಷ್ಮಿಸಿಂಗ್ ಅವರನ್ನು ನಾಯಿಯಿಂದ ರಕ್ಷಣೆ ಮಾಡಿದ್ದಾರೆ. ತಕ್ಷಣವೇ ಲಕ್ಷ್ಮಿ ಸಿಂಗ್ ಅವರು ಆನಂದಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಸದ್ಯ ಅಪಾಯದಿಂದ ಪಾರಾಗಿದ್ದು , SIR ಕಾರ್ಯವನ್ನು ಮುಂದುವರಿಸಿದ್ದಾರೆ.





