ಸಾಗರ : ಎರಡು ಬೈಕ್ಗಳ ನಡುವೆ ಅಪಘಾತವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಆನಂದಪುರ ಸಮೀಪದ ಜಂಬೆಕೊಪ್ಪದ ಬಸ್ ನಿಲ್ದಾಣದ ಬಳಿ ನಡೆಸಿದೆ.
ಜೂನ್ 30 ರಂದು ಸಾಗರ ಕಡೆಯಿಂದ ಆನಂದಪುರ ಕಡೆ ಬರುತ್ತಿದ್ದ ಬೈಕ್ ಹಾಗೂ ಆನಂದಪುರ ಕಡೆಯಿಂದ ಸಾಗರದ ಕಡೆಗೆ ಹೋಗುತ್ತಿದ್ದ ಬೈಕುಗಳ ನಡುವೆ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಆನಂದಪುರ ಕಡೆಯಿಂದ ಸಾಗರ ಕಡೆಗೆ ಹೋಗುತ್ತಿದ್ದ ನಾರಾಯಣ ಎಂಬುವವರಿಗೆ ತೀವ್ರ ಪ್ರಮಾಣದ ಗಾಯ. ಇನ್ನೊಂದು ಬೈಕ್ ನಿಂದ ಇಬ್ಬರು ಪ್ರಯಾಣಿಸುವವರಿಗೂ ಸಹ ಸಣ್ಣಪುಟ್ಟ ಗಾಯದಿಂದ. ಗಾಯಾಳುಗಳನ್ನ ಸಾಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ತೀವ್ರವಾಗಿ ಗಾಯಕೊಂಡ ನಾರಾಯಣ್ ಅವರಿಗೆ ಸಾಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಮಾರ್ಗ ಮಧ್ಯ ಆಯನೂರು ಬಳಿ ಸಾವನಪ್ಪಿದ್ದಾರೆ.
ಅಪಘಾತಪಡಿಸಿದ ಬೆನ್ನೆಲ್ಲಾ ಸೈಕಲ್ ಚಾಲಕನ ವಿರುದ್ಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






