ಸಾಗರ : ತಾಲ್ಲೂಕಿನ ಮಳ್ಳಾ ಕೊಪ್ಪ ಗ್ರಾಮದಲ್ಲಿ ಹೈ ಟೆನ್ಷನ್ ವೈಯರ್ ಕಾಮಗಾರಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಪರಶುರಾಮ ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ 7 ಜನರ ವಿರುದ್ಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪರಶುರಾಮ ಅವರು ಸರ್ವೇಯರ್ ಮಲ್ಲನಗೌಡ ಹಾಗೂ ಇತರರೊಂದಿಗೆ ತಾಲ್ಲೂಕಿನ ಮಳ್ಳಾ ಕೊಪ್ಪ ಗ್ರಾಮದಲ್ಲಿ ಶಿವಕುಮಾರ್ ಅವರ ಜಾಗದಲ್ಲಿ ಹೈ ಟೆನ್ಷನ್ ವೈಯರ್ ಕಾಮಗಾರಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ , ಆರೋಪಿತರೆಲ್ಲರೂ ಸಮಾನ ಉದ್ದೇಶದಿಂದ ಗುಂಪು ಕಟ್ಟಿಕೊಂಡು, ಕೈಗಳಲ್ಲಿ ದೊಣ್ಣೆ ಕಲ್ಲಿನಿಂದ ಸರ್ವೇಯರ್ ಮಲ್ಲನಗೌಡ ಅವರಿಗೆ , ಕೆಲಸ ಮಾಡಲು ಯಾರು ಹೇಳಿದ್ದು ಎಂದು ಹಲ್ಲೆ ಮಾಡಲು ಮುಂದಾಗುತ್ತಾರೆ.
ಈ ಸಂದರ್ಭದಲ್ಲಿ ಜಗಳ ಬಿಡಿಸಲು ಹೋದ ಪರಶುರಾಮ ಅವರಿಗೆ ಸಾಯಿಸುವ ಉದ್ದೇಶದಿಂದ ಕೈ, ಕಲ್ಲಿನಿಂದ ತಲೆ, ಎದೆಗೆ ಹೊಡೆದು , ಓಡಿಸಿಕೊಂಡು ಹೋದ ಸಂದರ್ಭದಲ್ಲಿ ಕುಮಾರ್ ಗೌಡ್ರು ಮನೆಯ ಬಳಿ ಬೀಳಿಸಿ, ಕಲ್ಲು ಕೋಲುಗಳಿಂದ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದಾರೆ. ಈ ಸಂದರ್ಭದಲ್ಲಿ ಕುಮಾರ್ ಗೌಡ್ರು ನೋಡಿದ ಆರೋಪಿಗಳು ಓಡಿಹೋಗಿದ್ದಾರೆ.
ಪರುಶುರಾಮ ಅವರು ಸಂಜು, ಸಂತೋಷ್, ರಾಘವೇಂದ್ರ, ಸಚಿನ್, ಸತೀಶ್, ಸುದೀಪ್, ಪರಮೇಶ್ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆನಂದಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ವಿವಿಧ ಕಲಂ ಅಡಿ ಪ್ರಕರಣ ದಾಖಲಾಗಿದೆ.





