ಸಾಗರ : ತಾಲ್ಲೂಕಿನ ಯಡೇಹಳ್ಳಿಯ ವರಸಿದ್ದ ವಿನಾಯಕ ಸ್ವಾಮಿಯ ಬ್ರಹ್ಮ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಯಡೇಹಳ್ಳಿ ಹಾಗೂ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಂದ ಆಗಮಿಸಿದ ಭಕ್ತರು ವರಿಸಿದ್ದಿ ವಿನಾಯಕ ಸ್ವಾಮಿಯ ಬ್ರಹ್ಮ ರಥೋತ್ಸವಕ್ಕೆ ಸಾಕ್ಷಿಯಾದರು. ಬಂದಂತಹ ಭಕ್ತರು ದೇವರಿಗೆ ತನು ಮನ ಧನ ಸಮರ್ಪಿಸಿದರು.
ವಿನಾಯಕ ಸ್ವಾಮಿಗೆ ಬೆಳಿಗ್ಗೆ ಸಾಮೂಹಿಕ ಗಣ ಹೋಮ ಹಾಗೂ ವಿಶೇಷ ಪೂಜೆ ನಡೆಯಿತು. ಮಧ್ಯಾಹ್ನ ಬಂದಂತ ಭಕ್ತರಿಗೆ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.
ಸಂಜೆ 5:00ಗೆ ದೇವಸ್ಥಾನದಿಂದ ಯಡೇಹಳ್ಳಿ ವೃತ್ತದವರೆಗೆ ಸ್ವಾಮಿಯ ರಥರಾಜಬೀದಿ ಉತ್ಸವ ಅದ್ದೂರಿಯಾಗಿ ಜರುಗಿತು.





