ಸಾಗರ: ತಾಲೂಕಿನ ಆನಂದಪುರದ ಪೊಲೀಸ್ ಠಾಣೆಯ ಎದುರು ಗಾಂಜಾ ಸೇವನೆ ಮಾಡಿದ ವ್ಯಕ್ತಿಯನ್ನು ಬಂಧನ ಮಾಡಿದ್ದಾರೆ. ದಿನಾಂಕ 27 ರ ಸಂಜೆ 6.30 ಸುಮಾರಿಗೆ ಸಾಗರ ಕಡೆಯಿಂದ ಆನಂದಪುರ ಕಡೆಗೆ ವಾಹನ ಅಡ್ಡಾದಿಡ್ಡಿ ಆಗಿ ಬಂದಿರುವುದನ್ನು ಗಮನಿಸಿದ ಪಿಎಸ್ಐ ಪ್ರವೀಣ್ ಹಾಗೂ ಅವರ ತಂಡ ಲಾರಿಯನ್ನು ನಿಲ್ಲಿಸಿ ವಿಚಾರಿಸಿದಾಗ ಆರೋಪಿ ಅಮಲಿನಲ್ಲಿ ಇರುವುದು ಕಂಡುಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ 25 ವಯಸ್ಸಿನ ಯುವಕ ಗಾಂಜಾ ಸೇವನೆಯಲ್ಲಿ ಬಂದಿತ ವ್ಯಕ್ತಿಯಾಗಿದ್ದಾನೆ. ಆರೋಪಿಯನ್ನು ಆನಂದಪುರದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಗಾಂಜ ಸೇವನೆ ಮಾಡಿರುವುದು ದೃಢಪಟ್ಟಿದೆ. ಯುವಕನ ವಿರುದ್ಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.