ಶಿವಮೊಗ್ಗ: ಸಿಗಂದೂರು ಸೇತುವೆಯ (Bridge) ಉದ್ಘಾಟನೆಯ ದಿನಾಂಕ ಒಂದು ವಾರದಲ್ಲಿ ನಿಗದಿಯಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ. ನವದೆಹಲಿಯಲ್ಲಿ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ, ಸಿಗಂದೂರು ಸೇತುವೆಯ ಲೋಕಾರ್ಪಣೆಗೆ ದಿನಾಂಕ ನಿರ್ಧರಿಸುವಂತೆ ಮನವಿ ಮಾಡಿದ ಸಂಸದ ರಾಘವೇಂದ್ರ, ಒಂದು ವಾರದಲ್ಲಿ ಉದ್ಘಾಟನಾ ದಿನಾಂಕ ಪ್ರಕಟವಾಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ನವೀನ ತಂತ್ರಜ್ಞಾನ ಮತ್ತು ಆಧುನಿಕ ತಾಂತ್ರಿಕ ವ್ಯವಸ್ಥೆಯೊಂದಿಗೆ, ಸುಮಾರು ₹430 ಕೋಟಿ ಅನುದಾನದಲ್ಲಿ ಈ ಸೇತುವೆಯನ್ನು ಅತ್ಯುತ್ತಮವಾಗಿ ನಿರ್ಮಿಸಲಾಗಿದೆ. ರಾಜ್ಯದ ಅತ್ಯುದ್ದವಾದ 2.25 ಕಿ.ಮೀ. ಕೇಬಲ್ ಆಧಾರಿತ ಸೇತುವೆಯಾಗಿರುವ ಈ ಕಾಮಗಾರಿಯ ಬಗ್ಗೆ ಸಂಸದ ರಾಘವೇಂದ್ರ ಮಾಹಿತಿ ನೀಡಿದ್ದಾರೆ.