ಸುದ್ದಿ ಮಳೇ ಅಡಿಕೆ ವಿಶೇಷ News State Rate Gold Crime Special History Shivamogga India Sports Litresture

---Advertisement---

ಅಧಿಕಾರಿಗಳು ಒತ್ತಡಕ್ಕೆ ಮಣಿಯದೆ ಸಿಗಂದೂರು ಸೇತುವೆ ಉದ್ಘಾಟನೆಗೆ ಮಾಜಿ ಸಚಿವ ಹರತಾಳು ಹಾಲಪ್ಪ ವಿಶೇಷ ಆಹ್ವಾನಿತರಾಗಿ ಆಹ್ವಾನಿಸಬೇಕು

On: July 13, 2025 3:51 PM
Follow Us:
---Advertisement---

ಸಾಗರ : ಅಧಿಕಾರಿಗಳು ಒತ್ತಡಕ್ಕೆ ಮಣಿಯದೆ ಸಿಗಂದೂರು ಸೇತುವೆ ಉದ್ಘಾಟನೆಗೆ ಮಾಜಿ ಸಚಿವ ಹರತಾಳು ಹಾಲಪ್ಪರವನ್ನು ವಿಶೇಷ ಆಹ್ವಾನಿತರಾಗಿ ಆಹ್ವಾನಿಸಬೇಕು ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ  ಹಾಗೂ ಬಿಜೆಪಿ ಮುಖಂಡ ರತ್ನಾಕರ್ ಹೊನಗೋಡು ಮನವಿ ಮಾಡಿದ್ದಾರೆ.

ಜನರ ಬಹುದಿನದ ಕನಸಾದ ಅಂಬಾರಗೋಡ್ಲು ಕಳಸವಳ್ಳಿ ಸೇತುವೆ ಜುಲೈ 14 ರಂದು (ನಾಳೆ) ಉದ್ಘಾಟನೆ ಆಗುತ್ತಿರುವುದು ಸಂತಸದ ವಿಷಯವಾಗಿದೆ. ಅಧಿಕಾರಿಗಳು ಪ್ರೋಟೋಕಾಲ್ ಪ್ರಕಾರ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಾಯಕರುಗಳಿಗೆ ಆಹ್ವಾನ ನೀಡಿದ್ದಾರೆ.20250713 163707

ಆದರೆ ಸೇತುವೆ ನಿರ್ಮಾಣ ಆಗುವಲ್ಲಿ 3 ಬಾರಿ ಶಾಸಕರಾಗಿ ಆಯ್ಕೆಯಾದ ಮಾಜಿ ಸಚಿವ ಹರತಾಳು ಹಾಲಪ್ಪ ಅವರ ಶ್ರಮವು ಸಹ ಇದೆ. ಹಿಂದೆ ದೋಣಿ ದುರಂತದಲ್ಲಿ ಸುಮಾರು 22 ಜನ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಸೇತುವೆ ನಿರ್ಮಾಣ ಆಗಲೇ ಬೇಕು ಎಂದು ಸಂಸದ ಬಿ.ವೈ ರಾಘವೇಂದ್ರ ಹಾಗೂ ಯಡಿಯೂರಪ್ಪ ಜೊತೆ ನಿರಂತರ ಚರ್ಚೆ ಹೋರಾಟದ ಫಲವಾಗಿ ಸೇತುವೆಯಾಗಿ ತಲೆಎತ್ತಿ ನಿಂತಿದೆ.

ಇದಲ್ಲದೆ ಸೇತುವೆ ನಿರ್ಮಾಣವಾಗಲು ಕೆಪಿಸಿಯಿಂದ NOC ಪತ್ರ ಬೇಕಾಗಿತ್ತು. ಪತ್ರ ಪಡೆಯಲು ಶಕ್ತಿ ಭವನದ ಎದುರು ಏಕಾಂಗಿ ಹೋರಾಟ ಮಾಡಿದ ಪರಿಣಾಮವಾಗಿ ಎಂ.ಡಿ  NOC ನೀಡಿದ್ದರು. ಇವೆಲ್ಲ ಹೋರಾಟಗಳನ್ನು ಪರಿಗಣಿಸಿ ಪ್ರೋಟೋಕಾಲ್  ಪ್ರಕಾರ ಆಹ್ವಾನ ನೀಡದಿದ್ದರೂ ವಿಶೇಷ ಆಹ್ವಾನಿತರಾಗಿ  ಗೌರವಿತವಾಗಿ ಯಾರದೇ ಒತ್ತಡಕ್ಕೆ ಮಣಿಯದೆ ಅಧಿಕಾರಿಗಳು ಅವರನ್ನು ಆಹ್ವಾನಿಸಬೇಕು  ಎಂದು ಮನವಿ ಮಾಡಿದರು.

Join WhatsApp

Join Now

Join Telegram

Join Now

ಪ್ರಮುಖ ಸುದ್ದಿ

ಆನಂದಪುರದ ವಿದ್ಯುತ್ ವಿತರಣಾ ಕೇಂದ್ರ ತುರ್ತು ನಿರ್ವಹಣೆ – ವಿದ್ಯುತ್ ವ್ಯತ್ಯಯ – Anandapura Power Distribution center emergency management – power outage

ಸಾಗರವನ್ನು ಜಿಲ್ಲೆಯನ್ನಾಗಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದ ಶಾಸಕ ಗೋಪಾಲಕೃಷ್ಣ ಬೇಳೂರು MLA Gopalakrishna Belur wrote a letter to chief minister siddaramaiah to make Sagara taluk a district.

ಅಕ್ರಮ ದನ ಸಾಗಾಟ – ಇಬ್ಬರ ಬಂಧನ – ಗೋವುಗಳ ರಕ್ಷಣೆ Illegal cattle smuggling – TWo arrested – Cow protection

ಕಡ್ಲೆಹಂಕ್ಲು ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವಕ್ಕೆ ದಿನಾಂಕ ನಿಗದಿ Date set for Kadlehanklu Marikamba Devi’s festival

ಉತ್ತಮ ಸಮಾಜ ಕಟ್ಟಲು ಯುವ ಪಿಳಿಗೆ ಸದೃಢರಾಗಬೇಕು -ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ -The younger generation must become strong to build a better society

ಪೊಲೀಸ್ ಠಾಣೆಯಲ್ಲಿ ದೌರ್ಜನ್ಯ ಪ್ರಕರಣ – ಆರೋಪಿಗಳ ಪರವಾಗಿ ಬಂದ ತೀರ್ಪು – Police station assault case – verdict in favor of the accused

Leave a Comment