- ಸಾಗರ : ತಾಲೂಕಿನ ಆನಂದಪುರ ಸಮೀಪದ ಬಳ್ಳಿ ಬೈಲು ಗ್ರಾಮದ ಬಳಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಮೂವರನ್ನು ಆನಂದಪುರ ಪೊಲೀಸರು ಬಂಧನ ಮಾಡಿದ್ದಾರೆ.
ಬಳ್ಳಿ ಬೈಲು ಗ್ರಾಮದಿಂದ ಆನಂದಪುರದ ಕಡೆಗೆ ತೆರಳುತ್ತಿದ್ದ ಅಶೋಕ್ ಲೈಲ್ಯಾಂಡ್ ವಾಹನವನ್ನು ಪಿಎಸ್ಐ ಪ್ರವೀಣ್ ಅವರ ಆದೇಶದ ಮೇರೆಗೆ ಪರಿಶೀಲನೆ ನಡೆಸಿದಾಗ ಅಕ್ರಮವಾಗಿ ಒಂದು ಎಮ್ಮೆ , ಒಂದು ಕೋಣನ ಮರಿ ಹಾಗೂ ಒಂದು ಹೋರಿ ಕರುವನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿರುವುದು ಕಂಡುಬಂದಿದೆ.
ವಿಚಾರಣೆ ಮಾಡಿದಾಗ ಸ್ಥಳೀಯ ವ್ಯಕ್ತಿ ಒಬ್ಬರಿಂದ ಖರೀದಿ ಮಾಡಿ ಮಾಂಸ ಮಾರಾಟ ಮಾಡುವ ಉದ್ದೇಶದಿಂದ ದಿಂಡದ ಹಳ್ಳಿಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ಒಪ್ಪಿಕೊಂಡಿರುತ್ತಾರೆ.
ಅಕ್ರಮ ಜಾನುವಾರಗಳ ಸಾಗಾಟದಲ್ಲಿ ಭಾಗಿಯಾದ ದಿಂಡದಹಳ್ಳಿ ವಾಸಿಗಳಾದ ಬಸವರಾಜ್, ಮರಿಯಪ್ಪ, ಗುಡ್ಡಪ್ಪ ಎಂಬುವರ ಮೇಲೆ ಆನಂದಪುರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.